Monday, January 26, 2009

ಗುರು ಸಂಸ್ಥೆ



ಹುಬ್ಬಳ್ಳಿಯ ಗುರು ಸಂಸ್ಥೆ ಯಶವಂತ ಸರದೇಶಪಾಂಡೆಯವರ ಕನಸು. ಈ ಸಂಸ್ಥೆಯ ಮೂಲಕ ಹಾಸ್ಯ ನಾಟಕಗಳ ಪ್ರದರ್ಶನ ನಿರಂತರವಾಗಿದೆ. ಮರಾಠಿ ರಂಗಭೂಮಿಯ ಶುದ್ಧ ಹಾಸ್ಯದ ನಾಟಕಗಳನ್ನು ಕನ್ನಡಕ್ಕೂ ಪರಿಚಯಿಸಿದ ಕೀರ್ತಿ ಈ ಸಂಸ್ಥೆಯದ್ದು. ನೋಡೂ ಟೆಕ್ಸ್ಟ್ ಎನ್ನುವ ಹೊಸ ಚಿಂತನೆಯ ಮೂಲಕ ಪಿಯುಸಿ ಪಠ್ಯಗಳನ್ನು ನಾಟಕದ ಮೂಲಕ ವಿದ್ಯಾರ್ಥಿಗಳಿಗೆ ಮುಟ್ಟಿಸಿದ್ದು ಈ ಸಂಸ್ಥೆ. ಏಕಲವ್ಯ ಸೇರಿದಂತೆ ಹಲವು ನಾಟಕಗಳನ್ನು ಸಿಡಿ ಮೂಲಕ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಪ್ರದರ್ಶಿಸಲಾಗಿದೆ. ಎಂಟಿಆರ್ ಸಂಸ್ಥೆಯ ನೆರವಿನಿಂದ ನಾಟಕಗಳ ಪ್ರದರ್ಶನ ಸಾಧ್ಯವಾಗಿದೆ. ಈ ಸಂಸ್ಥೆಯ ಮೂಲಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಕಲಾವಿದರಿಗೂ ಅವಕಾಶ ಒದಗಿಸಿದ್ದು ಹೆಗ್ಗಳಿಕೆ.

No comments:

Post a Comment